ಅಖಿಲ ಭಾರತ ತೃಣಮೂಲ ಕಾಂಗ್ರೆಸ್ (ಸಂಕ್ಷಿಪ್ತವಾಗಿ ಎಐಟಿಸಿ , ಮತ್ತು ತೃಣಮೂಲ ಕಾಂಗ್ರೆಸ್ ಎಂದೂ ಕರೆಯಲ್ಪಡುವ ಹಾಗೂ ಈ ಹಿಂದೆ ಪಶ್ಚಿಮ ಬಂಗಾಳ ತೃಣಮೂಲ ಕಾಂಗ್ರೆಸ್ ) ಎಂದು ಕರೆಯಲಾಗುತ್ತಿದ್ದ ಇದು ಭಾರತದಲ್ಲಿನ ರಾಜಕೀಯ ಪಕ್ಷವಾಗಿದೆ. 1998 ರಲ್ಲಿ ಸ್ಥಾಪಿತವಾದ ಈ ಪಕ್ಷವು ಬಹುತೇಕ ಪಶ್ಚಿಮ ಬಂಗಾಳದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನಿಂದ ಪಕ್ಷಾಂತರಿಗಳನ್ನು ಒಳಗೊಂಡಿತ್ತು. ಪಕ್ಷದ ನೇತೃತ್ವವನ್ನು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ವಹಿಸಿದ್ದಾರೆ. == ಇತಿಹಾಸ == === ಪಕ್ಷದ ನಿರ್ಮಾಣ === 1997 ರ ಡಿಸೆಂಬರ್ 22 ರಂದು ಮಮತಾ ಬ್ಯಾನರ್ಜಿಯವರನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಿಂದ ಉದ್ಘಾಟಿಸಲಾಯಿತು. ಅವರು ತಮ್ಮದೇ ಸ್ವಂತ ಪಕ್ಷವಾದ "ತೃಣಮೂಲ ಕಾಂಗ್ರೆಸ್" ಅವರು ನಿರ್ಮಿಸಿದರು, ಅದನ್ನು 1997 ರ ಡಿಸೆಂಬರ್ ಮಧ್ಯಭಾಗದಲ್ಲಿ ಭಾರತೀಯ ಚುನಾವಣಾ ಆಯೋಗದೊಂದಿಗೆ ನೋಂದಾಯಿಸಲಾಯಿತು. ಚುನಾವಣಾ ಆಯೋಗವು ಪಕ್ಷಕ್ಕೆ ಅನನ್ಯ ಚಿಹ್ನೆಯಾದ ಜೋರಾ ಘಾಸ್ ಫೂಲ್ ಅನ್ನು ನೀಡಿತು, ಈ ಚಿಹ್ನೆಯು ಕೆಳಭಾಗಕ್ಕೆ-ಹೆಜ್ಜೆಯಿಡುವ ಹುಲ್ಲು-ಬೇರಿನ ಹೂವುಗಳನ್ನು ಸಂಕೇತಿಸುತ್ತದೆ. === ಚುನಾವಣೆಗಳಲ್ಲಿ ಸಾಧನೆಗಳು === 1998 ರಲ್ಲಿ ಪಕ್ಷವು ರಚನೆಯಾದ ನಂತರ ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಭಾರಿ ಪ್ರತಿಕ್ರಿಯೆಯನ್ನು ಪಡೆಯಲು ಪ್ರಾರಂಭಿಸಿತು. ಮುಖ್ಯವಾಗಿ ಕಾಂಗ್ರೆಸ್ ಹಾಗೂ ಎಡ ಪಕ್ಷದ ಕಾರ್ಯಕರ್ತರೂ ಸಹ ಹೊಸದಾಗಿ ರಚನೆಯಾದ ಪಕ್ಷಕ್ಕೆ ಸೇರ್ಪಡೆಯಾದರು. 1998 ರ ಲೋಕಸಭಾ ಚುನಾವಣೆಯಲ್ಲಿ, ಟಿಎಮ್‌ಸಿ 7 ಸ್ಥಾನಗಳಲ್ಲಿ ಜಯಶಾಲಿಯಾಯಿತು. 1999 ರಲ್ಲಿ ಮತ್ತೊಂದು ಲೋಕಸಭಾ ಚುನಾವಣೆಯು ನಡೆಯಿತು, ಅದರಲ್ಲಿ ತೃಣಮೂಲ ಕಾಂಗ್ರೆಸ್ 8 ಸ್ಥಾನಗಳಲ್ಲಿ ಜಯಶಾಲಿಯಾಗುವುದರ ಮೂಲಕ ಒಂದು ಸ್ಥಾನವನ್ನು ಹೆಚ್ಚಿಸಿಕೊಂಡಿತು. 2000 ರಲ್ಲಿ, ಕೊಲ್ಕತ್ತಾ ಮುನ್ಸಿಪಲ್ ಕಾರ್ಪೊರೇಶನ್ ಚುನಾವಣೆಯಲ್ಲಿ ಗೆಲ್ಲುವುದರ ಮೂಲಕ ಟಿಎಮ್‌ಸಿಯು ಪ್ರಮುಖವಾದ ಮುನ್ಸಿಪಾಲಿಟಿ ಚುನಾವಣೆಯಲ್ಲಿ ಜಯ ಸಾಧಿಸಿತು. 2001 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಟಿಎಮ್‌ಸಿಯು 60 ಸ್ಥಾನಗಳಲ್ಲಿ ಜಯ ಸಾಧಿಸಿತು. 2004 ರ ಲೋಕಸಭಾ ಚುನಾವಣೆಯಲ್ಲಿ, ಟಿಎಮ್‌ಸಿಯು ಕಳಪೆ ಸಾಧನೆ ತೋರಿ ಕೇವಲ 1 ಸ್ಥಾನದಲ್ಲಿ ಮಾತ್ರ ಜಯ ಸಾಧಿಸಲು ಯಶಸ್ವಿಯಾಯಿತು. 2006 ರ ವಿಧಾನಸಭಾ ಚುನಾವಣೆಯಲ್ಲಿ, ಟಿಎಮ್‌ಸಿ 30 ಸ್ಥಾನಗಳಲ್ಲಿ ಜಯ ಸಾಧಿಸಿತು. == ನಂದಿಗ್ರಾಮ ಆಂದೋಲನ == ಪಶ್ಚಿಮ ಬಂಗಾಳ ಸರ್ಕಾರವು ನಂದಿಗ್ರಾಮದಲ್ಲಿ (ಪಶ್ಚಿಮ ಮಿಡ್ನಾಪುರದಲ್ಲಿ ನೆಲೆಸಿದೆ) ಒತ್ತಾಯಪೂರ್ವಕವಾಗಿ ಭೂಮಿಯನ್ನು ವಶಪಡಿಸಿಕೊಂಡು ರಾಸಾಯನಿಕ ಕೇಂದ್ರವನ್ನು ಪ್ರಾರಂಭಿಸಲು ಬಯಸಿತು. 2006 ರ ಡಿಸೆಂಬರ್‌ನಲ್ಲಿ, ನಂದಿಗ್ರಾಮದ ಪ್ರಮುಖ ಭಾಗವನ್ನು ಸ್ವಾಧೀನಪಡಿಸಿಕೊಳ್ಳುವುದಾಗಿ ಮತ್ತು 70,000 ಜನರನ್ನು ಅವರ ಮನೆಗಳಿಂದ ತೆರವುಗೊಳಿಸುವುದಾಗಿ ಹಲ್ದಿಯಾ ಅಭಿವೃದ್ಧಿ ಪ್ರಾಧಿಕಾರವು (ಆಗ ಸಿಪಿಎಂ ನಾಯಕರಾದ ಲಕ್ಷ್ಮಣ್ ಸೇತ್‌ರವರು ಇದರ ಮುಖ್ಯಸ್ಥರಾಗಿದ್ದರು) ನಂದಿಗ್ರಾಮದ ಜನರಿಗೆ ನೋಟೀಸನ್ನು ನೀಡಿತು. ಈ ಭೂಮಿ ವಶಪಡಿಸಿಕೊಳ್ಳುವಿಕೆಯ ವಿರುದ್ಧ ಜನರು ಆಂದೋಲನವನ್ನು ಪ್ರಾರಂಭಿಸಿದರು ಮತ್ತು ತೃಣಮೂಲ ಕಾಂಗ್ರೆಸ್ ಇದರ ನೇತೃತ್ವವನ್ನು ವಹಿಸಿತು. ಭೂಮಿ ವಶಪಡಿಸಿಕೊಳ್ಳುವಿಕೆ ಮತ್ತು ತೆರವುಗೊಳಿಸುವಿಕೆಯ ವಿರುದ್ಧ ಭೂಮಿ ಉಚ್ಚಾಚೇಡ್ ಪ್ರತಿರೋಧ್ ಸಮಿತಿ (ಬಿಯುಪಿಸಿ) ಅನ್ನು ರೂಪಿಸಲಾಯಿತು. 2007 ರ ಮಾರ್ಚ್ 14 ರಂದು ಪೋಲೀಸರ ಗೋಲಿಬಾರ್‌ನಲ್ಲಿ 14 ಗ್ರಾಮಸ್ಥರು ಸಾವನ್ನಪ್ಪಿದರು. ಇನ್ನೂ ಹಲವು ಜನರು ಕಾಣೆಯಾದರು. ಶಸ್ತ್ರಸಜ್ಜಿತ ಸಿಪಿಎಂ ಕಾರ್ಯಕರ್ತರು ಪೊಲೀಸರೊಂದಿಗೆ ನಂದಿಗ್ರಾಮದಲ್ಲಿ ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿದರೆಂದು ಹಲವು ಮೂಲಗಳು ಹೇಳಿದವು ಮತ್ತು ಅದನ್ನು ಸಿಬಿಐ ತನ್ನ ವರದಿಯಲ್ಲಿ ಬೆಂಬಲಿಸಿತು. ಬಹು ಸಂಖ್ಯೆಯಲ್ಲಿ ವಿಚಾರವಾದಿಗಳು ರಸ್ತೆಗಳಲ್ಲಿ ಪ್ರತಿಭಟನೆಯನ್ನು ನಡೆಸಿದರು ಮತ್ತು ಈ ಘಟನೆಯು ಹೊಸ ಆಂದೋಲನದ ಹುಟ್ಟಿಗೆ ಕಾರಣವಾಯಿತು. ತೃಣಮೂಲ ಕಾಂಗ್ರೆಸ್ ನಾಯಕರಾದ ಸುವೇಂದು ಅಧಿಕಾರಿ (ಪ್ರಸ್ತುತ ತಾಮ್ಲುಕ್‌ನ ಲೋಕಸಭಾ ಸದಸ್ಯರು) ಆಂದೋಲನದ ನೇತೃತ್ವ ವಹಿಸಿದರು. == 2009 ಸಾಮಾನ್ಯ ಚುನಾವಣೆ == 2009 ರ ಲೋಕಸಭಾ ಚುನಾವಣೆಯಲ್ಲಿ, ತೃಣಮೂಲ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಪಶ್ಚಿಮ ಬಂಗಾಳದಲ್ಲಿ 26 ಸ್ಥಾನಗಳಲ್ಲಿ ಜಯಸಾಧಿಸಿತು. 19 ಸ್ಥಾನಗಳಲ್ಲಿ ಟಿಎಂಸಿ ಸ್ವತಃ ಜಯ ಸಾಧಿಸಿದರೆ, 6 ಸ್ಥಾನಗಳಲ್ಲಿ ಐಎನ್‌ಸಿ ಮತ್ತು ಒಂದರಲ್ಲಿ ಎಸ್‌ಯುಸಿಎಲ್ ಜಯಸಾಧಿಸಿತು. == 2010 ಪೌರಸಭೆ ಚುನಾವಣೆಗಳು == ಕೊಲ್ಕತ್ತಾ ನಗರಪಾಲಿಕೆ ಚುನಾವಣೆಯಲ್ಲೂ ಸಹ ಒಟ್ಟು 141 ಸ್ಥಾನಗಳಲ್ಲಿ 97 ಸ್ಥಾನಗಳನ್ನು ಗೆದ್ದು ತೃಣಮೂಲ ಕಾಂಗ್ರೆಸ್ ಜಯ ಸಾಧಿಸಿತು. == ದೇಗಂಗಾ ಗಲಭೆಗಳು == ತೃಣಮೂಲ ಕಾಂಗ್ರೆಸ್‌ನ ಸದಸ್ಯರು 2010 ದೇಬಗಂಗಾ ಗಲಭೆಗಳಲ್ಲಿ ನೇತೃತ್ವ ವಹಿಸಿದ ಮತ್ತು ಭಾಗವಹಿಸಿದ ಆರೋಪವನ್ನು ಮಾಡಲಾಯಿತು, ಅದರಲ್ಲಿ ತೃಣಮೂಲ ಕಾಂಗ್ರೆಸ್‌ನ ಲೋಕಸಭಾ ಸದಸ್ಯರಾದ ಹಾಜಿ ನುರುಲ್ ಇಸ್ಲಾಂ ನೇತೃತ್ವದ ಮುಸ್ಲಿಂ ಗುಂಪು ಹಿಂದೂಗಳು ಮತ್ತು ಅವರ ಆಸ್ತಿಪಾಸ್ತಿಗಳ ಮೇಲೆ ಆಕ್ರಮಣ ಮಾಡಿತ್ತು. ಹಿಂದೂ ದೇವಾಲಯಗಳ ಮೇಲೆ ಮುಸ್ಲೀಮರು ದಿಗ್ಭಂಧನ ವಿಧಿಸಿದ ಕಾರಣದಿಂದ ಭುಗಿಲೆದ್ದು ನಾಲ್ಕು ದಿನಗಳ ಕಾಲ ನಡೆದ ಗಲಭೆಯಲ್ಲಿ ಇಸ್ಲಾಂ ಅವರು ಸೂತ್ರಧಾರರಾಗಿದ್ದರು ಎಂದು ಆರೋಪ ಹೊರಿಸಲಾಗಿತ್ತು. == ಮುಖಂಡತ್ವ == ಮಮತಾ ಬ್ಯಾನರ್ಜಿ == ಇವನ್ನೂ ನೋಡಿ == ಟೆಂಪ್ಲೇಟು: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನಿಂದ ಪ್ರತ್ಯೇಕಗೊಂಡ ಪಕ್ಷಗಳು ಭಾರತದಲ್ಲಿನ ರಾಜಕೀಯ ಪಕ್ಷಗಳ ಪಟ್ಟಿ ಭಾರತದ ರಾಜಕೀಯ == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ಅಖಿಲ ಭಾರತ ತೃಣಮೂಲ ಕಾಂಗ್ರೆಸ್ 2013-03-05 ವೇಬ್ಯಾಕ್ ಮೆಷಿನ್ ನಲ್ಲಿ. — ಅಧಿಕೃತ ವೆಬ್‌ಸೈಟ್